ಬೆಂಗಳೂರು, ಫೆ. 25 (DaijiworldNews/AK): ನಮ್ಮ ಸರ್ಕಾರ ಎಲ್ಲಾ ಹುದ್ದೆ ಭರ್ತಿಗೆ ಸಿದ್ಧ ಇದೆ, ವಯೋಮಿತಿ ಹೆಚ್ಚಳದ ಬಗ್ಗೆಯೂ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಕುರಿತು ಸಚಿವರು ಮಾತನಾಡಿ, ಸರ್ಕಾರ ಎಲ್ಲಾ ಹುದ್ದೆ ಭರ್ತಿಗೆ ಸಿದ್ದ ಇದೆ. ಯುವಕರ ಸಮಸ್ಯೆಗಳ ಅರಿವಿದೆ, ವಿಪಕ್ಷದಲ್ಲಿ ಇದ್ದಾಗಲೂ ನಾವು ಸ್ಪಂದಿಸಿದ್ದೇವೆ ಈಗಲೂ 35-40 ಸಾವಿರ ಹುದ್ದೆ ತುಂಬಿದ್ದೇವೆ. ಈಗಲೂ ಒಳ ಮೀಸಲಾತಿ ಸಮಸ್ಯೆ ಸ್ವಲ್ಪ ಇದೆ, ಎಲ್ಲವನ್ನು ಸರಿಪಡಿಸಿಕೊಂಡು ನೇಮಕಾತಿ ಆಗಲಿದೆ ಗುರುವಾರ ಕ್ಯಾಬಿನೆಟ್ ನಲ್ಲೂ ಇದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ತಕ್ಷಣಕ್ಕೆ ಮಾಡಬಹುದಾದ ನೇಮಕಾತಿಗಳನ್ನ ತಕ್ಷಣ ಮಾಡುತ್ತೇವೆ. ಮೀಸಲಾತಿನೂ ಇರಬೇಕು ಸಾಮಾಜಿಕ ನ್ಯಾಯದ ಪರನೂ ಇರಬೇಕು ಸಂವಿಧಾನನದ ಪ್ರಕಾರ ಮಾಡುವಾಗ ಕೆಲವೆಲ್ಲ ಆಗುತ್ತದೆ. ಯಾರಾದ್ರೂ ಕೋರ್ಟ್ಗೆ ಹೋದ್ರೆ ಅದು ನ್ಯಾಯಾಲಯದ ಮೇಲೆ ನಿರ್ಧಾರ ಆಗುತ್ತೆ. ಅಲ್ಲಿ ಹೈಕೋರ್ಟ್ ಸುಪ್ರೀಂ ಕೋರ್ಟ್ ಅಂತ ಹೋದಾಗ ಕೆಲವು ತಡವಾಗಬಹುದು ಎಂದಿದ್ದಾರೆ.
ಇನ್ನೂ ವಯೋಮಿತಿ ಹೆಚ್ಚಳದ ಬಗ್ಗೆಯೂ ಈಗಾಗಲೇ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಬೇರೆ ಏನಿದ್ದರೂ ಪರಿಶೀಲಿಸುತ್ತೇವೆ. ಬಿಜೆಪಿ ಅವಧಿಯಲ್ಲಿ ವಿಧಾನಸೌಧ ವ್ಯಾಪಾರ ಸೌಧವಾಗಿತ್ತು. ಎಷ್ಟು ಹಗರಣಗಳು ಆಗಿತ್ತು ಗೊತ್ತಿದೆ. ಅವರಿದ್ದಾಗ ಯಾರೆಲ್ಲ ಹುದ್ದೆ ಎಷ್ಟಕ್ಕೆ ಸೇಲ್ ಮಾಡಿದ್ದಾರೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.