ಪಾಲ್ಘಾರ್, ಫೆ. 20 (DaijiworldNews/HR): ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟ ಹದಿನಾರು ತಿಂಗಳ ನಂತರ ಡಿಎನ್ಎ ಮಾದರಿಯ ವಿಶ್ಲೇಷಣೆ ಮೂಲಕ ಆ ವ್ಯಕ್ತಿಯ ಕುಟುಂಬವನ್ನು ರೈಲ್ವೆ ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಾಂಧರ್ಭಿಕ ಚಿತ್ರ
ಪಾಲ್ಘಾರ್ ಮತ್ತು ಬೋಯಿಸಾರ್ ರೈಲ್ವೆ ನಿಲ್ದಾಣಗಳ ನಡುವಿನ ಹಳಿಯ ಮೇಲೆ 2019ರಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತಪಟ್ಟ ವ್ಯಕ್ತಿಯ ಗುರುತು ಸಿಕ್ಕಿರಲಿಲ್ಲ. ಮೃತ ವ್ಯಕ್ತಿಯ ಮೂಳೆಗಳನ್ನು ಡಿಎನ್ಎ ಪರೀಕ್ಷೆಗಾಗಿ ಮುಂಬೈನ ಪ್ರಯೋಗಾಲಯದಲ್ಲಿ ಸಂಗ್ರಹಿಸಿಡಲಾಗಿತ್ತು.
ಬಳಿಕ ಪೊಲೀಸರು ಈ ವ್ಯಕ್ತಿಯ ಕುಟುಂಬದವರನ್ನು ಪತ್ತೆ ಮಾಡಲು ತನಿಖೆ ಮುಂದುವರಿಸಿದ್ದು, ರೈಲ್ವೆ ಸ್ಟೇಷನ್ಗಳ ಆಸುಪಾಸಿನ ಹಳ್ಳಿಗಳಿಗೆ ಭೇಟಿ ನೀಡಿ ವಿಚಾರಿಸಿದ್ದಾರೆ, ಈ ಸಂದರ್ಭದಲ್ಲಿ 58 ವರ್ಷದ ಕಾರ್ಮಿಕರೊಬ್ಬರು, ನನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ಹೇಳಿದ್ದು, ಪೊಲೀಸರು ಆ ವ್ಯಕ್ತಿಯ ರಕ್ತದ ಮಾದರಿಯನ್ನು ಪರೀಕ್ಷೆ ಮತ್ತು ಡಿಎನ್ಎ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದರು.
ಇನ್ನು ಐದಾರು ದಿನಗಳ ನಂತರ ಪ್ರಯೋಗಾಲಯದವರು ಮೃತ ವ್ಯಕ್ತಿ ಮತ್ತು ಈ ಕಾರ್ಮಿಕನ ಡಿಎನ್ಎ ಮಾದರಿಗಳು ಹೊಂದಿಕೆಯಾಗುತ್ತಿದೆ ಎಂದು ಹೇಳಿದ್ದು, ಈ ಪ್ರಕಾರ ಮೃತ ವಕ್ತಿಯು ಆ ಕಾರ್ಮಿಕನ ಮಗ ಎಂದು ತಿಳಿಸಿರುವುದಾಗಿ ಪಾಲ್ಘಾರ್ ರೈಲ್ವೆ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಯೋಗೇಶ್ ಆತ್ಮರಾಮ್ ದೇವಾರೆ ಮಾಹಿತಿ ನೀಡಿದ್ದಾರೆ.