ಉತ್ತರ ಪ್ರದೇಶ, ಮಾ 20(DaijiworldNews/MS): ಕೇವಲ 8ನೇ ತರಗತಿ ಓದಿದ್ದ ನಕಲಿ ವೈದ್ಯನೊಬ್ಬ ರೇಜರ್ ಬ್ಲೇಡ್ ನಿಂದ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿದ್ದ ಪರಿಣಾಮ ತೀವ್ರ ರಕ್ತಸಾವ್ರವಾಗಿ ತಾಯಿ ಮಗು ಮೃತಪಟ್ಟ ಘಟನೆ ಉತ್ತರಪ್ರದೇಶದ ಆಸ್ಪತ್ರೆಯೊಂದರಲ್ಲಿ ನಡೆದಿದೆ.

'ರಾಜಾರಾಮ್ ಅವರ ಪತ್ನಿ ಪೂನಂ (35) ಎಂಬ ಮಹಿಳೆಗೆ ಗುರುವಾರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೂಲಗಿತ್ತಿಯ ಬಳಿಗೆ ಕರೆದೊಯ್ದರು, ಅವರು ದಿಹ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲು ಹೇಳಿದರು . ಆಕೆಯ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ 140 ಕಿ.ಮೀ ದೂರದ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಿದ್ದರಿಂದ ದೀಹ ಗ್ರಾಮದಲ್ಲಿರುವ ಮಾ ಶಾರದಾ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ತಾಯಿ ಮಗು ಶಸ್ತ್ರಚಿಕಿತ್ಸೆಯ ವೇಳೆ ವಿಪರೀತ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ ಎಂದು ಪತಿ ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಾ ಶಾರದಾ ಆಸ್ಪತ್ರೆಯ ಮಾಲೀಕ ಶುಕ್ಲಾ ಎಂಬಾತ 12 ಕ್ಲಾಸ್ ಪಾಸ್ ಆಗಿದ್ದು ಈತನು ಆಸ್ಪತ್ರೆಯ ಮಾಲೀಕನಾಗಿದ್ದು, ಈತ 8 ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದ 'ಈ ಪ್ರಕರಣ ಸಂಬಂಧ ನಕಲಿ ವೈದ್ಯ ಮತ್ತು ಆಸ್ಪತ್ರೆಯ ಕಾರ್ಯನಿರ್ವಾಹಕನನ್ನು ಬಂಧಿಸಲಾಗಿದೆ' ಎಂದು ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಚತುರ್ವೇದಿ ಹೇಳಿದ್ದಾರೆ.