ಬಲಿಯಾ, ಡಿ.07 (DaijiworldNews/PY): "ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಾಲಯದ ಬಳಿ ಇರುವ ಮಸೀದಿಯನ್ನು ಮುಸ್ಲಿಮರು ಹಿಂದೂಗಳಿಗೆ ಹಸ್ತಾಂತರಿಸಬೇಕು" ಎಂದು ಉತ್ತರ ಪ್ರದೇಶದ ಸಚಿವ ಆನಂದ್ ಸ್ವರೂಪ್ ಶುಕ್ಲಾ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಿಂದೂಗಳಿಗೆ ಮಥುರಾದಲ್ಲಿರುವ ಶ್ವೇತವಣದ ಕಟ್ಟಡಗಳು ನೋವನ್ನುಂಟು ಮಾಡುತ್ತವೆ. ಈ ಕಟ್ಟಡಗಳನ್ನು ನ್ಯಾಯಾಲಯದ ಸಹಕಾರದೊಂದಿಗೆ ತೆರವುಗೊಳಿಸುವ ಕಾಲ ಬರುತ್ತದೆ" ಎಂದಿದ್ದಾರೆ.
"ರಾಮ ಹಾಗೂ ಕೃಷ್ಣ ತಮ್ಮ ಪೂರ್ವಜರು, ಬಾಬರ್, ಅಕ್ಬರ್ ಹಾಗೂ ಔರಂಗಜೇಬ್ ದಾಳಿಕೋರರು ಎನ್ನುವುದನ್ನು ಮುಸ್ಲಿಮರು ಒಪ್ಪಿಕೊಳ್ಳಬೇಕು ಎನ್ನುವುದನ್ನು ರಾಮಮನೋಹರ್ ಲೋಹಿಯಾ ಅವರೇ ತಿಳಿಸಿದ್ದಾರೆ. ಹಾಗಾಗಿ ಆಕ್ರಮಣಕಾರರು ನಿರ್ಮಿಸಿದ ಕಟ್ಟಡಗಳೊಂದಿಗೆ ಮುಸ್ಲಿಮರು ಸಂಬಂಧ ಹೊಂದಬಾರದು" ಎಂದು ಹೇಳಿದ್ದಾರೆ.
"ದೇಶದಲ್ಲಿರುವ ಎಲ್ಲಾ ಮುಸ್ಲಿಮರು ಹಿಂದೂ ಧರ್ಮಕ್ಕೆ ಮರಳಬೇಕು. ಇತಿಹಾಸವನ್ನು ಗಮನಿಸಿದರೆ, 200-250 ವರ್ಷಗಳ ಹಿಂದೆ ದೇಶದಲ್ಲಿರುವ ಎಲ್ಲಾ ಮುಸ್ಲಿಮರು ಮತಾಂತರಗೊಂಡಿದ್ದರು ಎನ್ನುವುದು ತಿಳಿಯುತ್ತದೆ" ಎಂದಿದ್ದಾರೆ.