ಗುರುಗ್ರಾಮ, ಡಿ 24 (DaijiworldNews/MS): ಬಲಪಂಥೀಯ ಕಾರ್ಯಕರ್ತರು ಎಂದು ಹೇಳಿಕೊಳ್ಳುವ ಗುಂಪೊಂದು ಕ್ರಿಸ್ಮಸ್ ಮುನ್ನಾದಿನದಂದು ಇಲ್ಲಿನ ಪಟೌಡಿಯ ಚರ್ಚ್ನ ಆವರಣಕ್ಕೆ ನುಗ್ಗಿ ಪ್ರಾರ್ಥನೆಗೆ ಅಡ್ಡಿಪಡಿಸಿದ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶುಕ್ರವಾರ ಸಂಜೆ ಕೆಲವು ಮಂದಿ ಚರ್ಚ್ ಆವರಣಕ್ಕೆ ನುಗ್ಗಿ 'ಜೈ ಶ್ರೀ ರಾಮ್' ಮತ್ತು 'ಭಾರತ್ ಮಾತಾ ಕೀ ಜೈ' ಘೋಷಣೆಗಳನ್ನು ಕೂಗುತ್ತಿರುವುದು ಹಾಗೂ ವೇದಿಕೆಯಲ್ಲಿ ಹಾಡುತ್ತಿದ್ದ ಕೆಲವರು ಕೆಳಕ್ಕೆ ತಳ್ಳಿ ಮೈಕ್ ಕಸಿದುಕೊಂಡಿದ್ದಾರೆ ವೀಡಿಯೊದಲ್ಲಿ ದಾಖಲಾಗಿದೆ.
ಚರ್ಚ್ನ ಆವರಣದಲ್ಲಿ ಮಹಿಳೆಯರು ಮತ್ತು ಮಕ್ಕಳು ಇದ್ದರು. ಈ ಅಹಿತಕರ ಘಟನೆ ನಡೆದಿದ್ದು ಎಲ್ಲರಲ್ಲೂ ಅತಂಕ ಮೂಡಿಸಿತು. ದಿನದಿಂದ ದಿನಕ್ಕೆ ಕಿರುಕುಳ ಹೆಚ್ಚುತ್ತಿದೆ, ನಮ್ಮ ಪ್ರಾರ್ಥಿಸುವ ಮತ್ತು ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗುತ್ತಿದೆ' ಎಂದು ಸ್ಥಳೀಯ ಪಾದ್ರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಸಂಬಂಧ ಇಲ್ಲಿಯವರೆಗೆಆದರೆ, ಯಾವುದೇ ದೂರು ಬಂದಿಲ್ಲ ಎಂದು ಪಟೌಡಿಯ ಠಾಣಾಧಿಕಾರಿ ಅಮಿತ್ ಕುಮಾರ್ ಹೇಳಿದ್ದಾರೆ. ಸ್ಥಳೀಯ ಆಡಳಿತ ಕೂಡ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.