ಲಖನೌ, ಡಿ.31 (DaijiworldNews/PY): "ಹಿಂದಿನ ಸರ್ಕಾರಗಳು ದುಡ್ಡನ್ನು ಖಬರಸ್ತಾನಕ್ಕೆ ವಿನಿಯೋಗ ಮಾಡುತ್ತಿದ್ದವು. ಆದರೆ, ಬಿಜೆಪಿ ಸರ್ಕಾರವು, ಧಾರ್ಮಿಕ ಸ್ಥಳಗಳ ಅಭಿವೃದ್ಧಿಗಾಗಿ ಹಣ ಬಳಕೆ ಮಾಡಿದೆ" ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಮಹಾರಾಜ್ಗಂಜ್ನಲ್ಲಿ ಪಕ್ಷದ ಜನ ವಿಶ್ವಾಸ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಹಿಂದಿನ ಸರ್ಕಾರಗಳನ್ನು ಹಣವನ್ನು ಖಬರಸ್ತಾನಕ್ಕೆ ಖರ್ಚು ಮಾಡುತ್ತಿದ್ದವು. ನಮ್ಮ ಸರ್ಕಾರ ಧಾರ್ಮಿಕ ಸ್ಥಳಗಳ ಅಭಿವೃದ್ದಿಗಾಗಿ ಹಣ ಬಳಕೆ ಮಾಡಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುವುದರೊಂದಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಯಿಂದ ಆರ್ಥಿಕತೆ ವೃದ್ಧಿಯಾಗಿದೆ" ಎಂದಿದ್ದಾರೆ.
ಈ ಸಂದರ್ಭ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿರುವ ಅವರು, "ಭೂ ಮಾಫಿಯಾ ವಿರುದ್ದ ಕ್ರಮ ತೆಗೆದುಕೊಳ್ಳುವಾಗ, ಎಸ್ಪಿ ಹಾಗೂ ಬಿಎಸ್ಪಿಗೆ ನೋವಾಗುತ್ತದೆ. ಮಾಫಿಯಾ ಹಾಗೂ ಗಲಭೆಕೋರರು ಉತ್ತರ ಪ್ರದೇಶ ಸರ್ಕಾರದ ಕ್ರಮದಿಂದಾಗಿ ಭಯಭೀತರಾಗಿದ್ದಾರೆ" ಎಂದಿದ್ದಾರೆ.