ಕೊಚ್ಚಿ, ನ 08 (DaijiworldNews/HR): ಯುವಕನೊಬ್ಬ ತನ್ನ ಸೋದರಸಂಬಂಧಿಯನ್ನು ಥಳಿಸಿ ಕೊಂದ ಆರೋಪದ ಮೇಲೆ ಪೊಲೀಸ್ ಅಧಿಕಾರಿಗಳು ಆತನನ್ನು ಬಂಧಿಸಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಮುಳಯಂಕಾವು ಪ್ರದೇಶದಲ್ಲಿ ನಡೆದಿದೆ.

ಮೃತನನ್ನು 21 ವರ್ಷದ ಹರ್ಷದ್ ಎಂದು ಗುರುತಿಸಲಾಗಿದ್ದು, ಆತನ ಸೋದರಸಂಬಂಧಿ ಹಕೀಮ್ (27) ಬಂಧಿತ ಆರೋಪಿ
ನಾಯಿಗೆ ಆಹಾರ ನೀಡದ ಕಾರಣ ಯುವಕನೊಬ್ಬ ತನ್ನ ಸೋದರಸಂಬಂಧಿಯನ್ನು ಹೊಡೆದು ಕೊಂದಿದ್ದಾನೆ ಎನ್ನಲಾಗಿದೆ.
ಹಕೀಂ ತನ್ನ ನಾಯಿಗೆ ಆಹಾರ ನೀಡದಿದ್ದಕ್ಕಾಗಿ ನಾಯಿ ಬೆಲ್ಟ್ ಮತ್ತು ಮರದ ಕೋಲಿನಿಂದ ಹರ್ಷಾದ್ ನನ್ನು ಥಳಿಸಿದ್ದಾನೆ ಎಂದು ಕೊಪ್ಪಂ ಪೊಲೀಸರು ತಿಳಿಸಿದ್ದಾರೆ.