ನವದೆಹಲಿ, ನ 10 (DaijiworldNews/HR): ಮೋರ್ಬಿ ಸೇತುವೆ ದುರಂತದ ವೇಳೆ ಹಲವರ ಜೀವ ರಕ್ಷಿಸಿದ ಮಾಜಿ ಶಾಸಕ ಕಾಂತಿಲಾಲ್ ಅಮೃತಿಯಾ ಅವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಿದೆ.

ಕಾಂತಿಲಾಲ್ ಅವರು ಮೋರ್ಬಿ ಸೇತುವೆ ದುರಂತದ ವೇಳೆ ತನ್ನ ಜೀವದ ಹಂಗು ತೊರೆದು ಟ್ಯೂಬ್ ಹಾಕಿಕೊಂಡು ನೀರಿಗೆ ಹಾರಿ ಅನೇಕ ಮಂದಿಯ ಜೀವ ಉಳಿಸಿದ್ದಾರೆ.
ಇನ್ನು ಈ ಹಿಂದೆ ಅವರ ಹೆಸರು ಪಟ್ಟಿಯಲ್ಲಿ ಇರಲಿಲ್ಲ ಆದರೆ ಅಪಘಾತದ ಸಂದರ್ಭದಲ್ಲಿ ತೋರಿದ ಧೈರ್ಯಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ತಡರಾತ್ರಿಯವರೆಗೂ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸುಮಾರು ನೂರು ಮಂದಿಯ ಹೆಸರುಗಳನ್ನು ಅಂಗೀಕರಿಸಲಾಗಿದ್ದು, ಮೊದಲ ಸುತ್ತಿನ ಎಲ್ಲಾ 89 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿರ್ಧರಿಸಲಾಗಿದೆ.