ಬೆಳಗಾವಿ, ಡಿ 19 (DaijiworldNews/DB): ವೀರ ಸಾವರ್ಕರ್ ಭಾವಚಿತ್ರವನ್ನು ಅನಾವರಣಗೊಳಿಸುವುದರಿಂದ ಕಾಂಗ್ರೆಸ್ಗೆ ಏನು ಸಮಸ್ಯೆಯಾಗುತ್ತದೆಯೋ ತಿಳಿಯದಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕಾಗಿ ಹೋರಾಡಿದ ದೇಶದ ಗೌರವಾನ್ವಿತ ವ್ಯಕ್ತಿ ಸಾವರ್ಕರ್. ಆದರೆ ವಿವೇಚನಾರಹಿತ ವಿಷಯಗಳನ್ನು ಪ್ರಸ್ತಾಪಿಸಿ ಜನರ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ಸಿಗರು ಇದೀಗ ಸಾವರ್ಕರ್ ವಿಚಾರದಲ್ಲಿಯೂ ಅದನ್ನೇ ಮಾಡುತ್ತಿದ್ದಾರೆ ಎಂದರು.
ಪದೇಪದೇ ಈ ರೀತಿಯ ವಿಚಾರಗಳನ್ನು ಪ್ರಸ್ತಾಪಿಸುವ ಕಾಂಗ್ರೆಸ್ನವರಿಗೆ ಇನ್ನೂ ಬುದ್ದಿ ಬಂದಿಲ್ಲ ಎಂದಾದಲ್ಲಿ ಜನರೇ ಮುಂದೆ ತೀರ್ಮಾನ ಮಾಡುತ್ತಾರೆ. ನಾವು ಬಸವಣ್ಣ,. ಅಂಬೇಡ್ಕರ್, ಗಾಂಧೀಜಿ ಸೇರಿ ಎಲ್ಲಾ ನಾಯಕರ ಫೋಟೋಗಳನ್ನು ಹಾಕುತ್ತೇವೆ. ಆದರೆ ಕಾಂಗ್ರೆಸ್ನಿಂದ ಹೇಳಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ ಎಂದವರು ಇದೇ ವೇಳೆ ತಿಳಿಸಿದರು.
ಕಾಂಗ್ರೆಸ್ನ್ನು ಜನ ತಿರಸ್ಕರಿಸಿದ್ದಾರೆ. ಬೀದಿ ಹೋರಾಟವೊಂದೇ ಈಗ ಅವರ ಪಾಲಿಗಿರುವಂತದ್ದು. ಬಿಜೆಪಿ ಮತಗಳನ್ನು ತೆಗೆದು ಹಾಕುವ ಹುನ್ನಾರವೂ ಅವರಿಂದ ನಡೆಯುತ್ತಿದ್ದು, ನನ್ನ ಕ್ಷೇತ್ರದ ಕೆಲವು ಹಳ್ಳಿಗಳಿಂದ ಈ ಸಂಬಂಧ ದೂರು ಬಂದಿದೆ ಎಂದವರು ಇದೇ ವೇಳೆ ದೂರಿದರು.