ಮಂಗಳೂರು, ಮೇ.14 (DaijiworldNews/PY): ಕೊರೊನಾ ಭೀತಿಗೆ ಒಳಗಾಗಿರುವ ನಗರದ ಜನರು ಕನಿಷ್ಠ ನೀರು ಸರಬರಾಜು ವಿಚಾರದಲ್ಲಿ ನಿರಾಳರಾಗಿದ್ದಾರೆ. ಏಕೆಂದರೆ, ನಗರಕ್ಕೆ ನೀರು ಸರಬರಾಜು ಮಾಡುವ ತುಂಬೆ ಅಣೆಕಟ್ಟು ಭರ್ತಿಯಾಗಿದ್ದು, ಬೇಸಿಗೆಯಲ್ಲಿ ನಗರಕ್ಕೆ ನೀರಿನ ತೊಂದರೆ ಇಲ್ಲ.
"ನೇತ್ರಾವತಿ ನದಿಗೆ ಅಡ್ಡಲಾಗಿ ಇರುವ ಅಣೆಕಟ್ಟಿನ ನೀರಿನ ಮಟ್ಟವು ಹೆಚ್ಚಿದ್ದು, ಮಳೆಗಾಲ ಪ್ರಾರಂವಾಗುವವರೆಗೂ ನಗರದ ನೀರಿನ ಅಗತ್ಯವನ್ನು ಪೂರೈಸಲು ಸಾಕಾಗುತ್ತದೆ. ಜನವರಿ ತನಕ ಮುಂದುವರಿದ ಮಳೆಯಿಂದಾಗಿ ನೇತ್ರಾವತಿ ನದಿಗೆ ಅದರ ಉಪನದಿಗಳಿಂದ ಸಾಕಷ್ಟು ನೀರು ಹರಿದುಬಂದಿದೆ" ಎಂದು ಅಧಿಕಾರಿಗಳು ಹೇಳುತ್ತಾರೆ.
"ಶನಿವಾರದವರೆಗೆ ತುಂಬೆ ಅಣೆಕಟ್ಟಿನಲ್ಲಿಆರು ಮೀಟರ್ನಷ್ಟು ನೀರು ಇತ್ತು. ನಗರದ ಜನರು ಈ ಅಣೆಕಟ್ಟಿನ ನೀರನ್ನು ಸಂಪೂರ್ಣವಾಗಿ ಅವಲಂಭಿಸಿರುವ ಕಾರಣ ಈ ಬೇಸಿಗೆಯಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ" ಎಂದು ನಗರ ನಿಗಮದ ಆಯುಕ್ತ ಅಕ್ಷಿ ಶ್ರೀಧರ್ ಹೇಳಿದ್ದಾರೆ.
ನಗರದ ಜನರು ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ನೀರಿನ ಕೊರತೆಯನ್ನು ಎದುರಿಸುತ್ತಾರೆ. ಕೆಲವೊಮ್ಮೆ ನೀರಿನ ಬೇಡಿಕೆಯನ್ನು ಪೂರೈಸುವ ಸಲುವಾಗಿ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಕೊರೊನಾ ನಿಯಂತ್ರಣದಲ್ಲಿ ನಿರತರಾಗಿರುವ ಅಧಿಕಾರಿಗಳಿಗೆ ಈ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯನ್ನು ಕೂಡಾ ನಿಭಾಯಿಸಬೇಕೆಂಬ ಆತಂಕದಲ್ಲಿದ್ದರು. ಆದರೆ, ತುಂಬೆ ಅಣೆಕಟ್ಟಿನಲ್ಲಿ ನೀರು ಭರ್ತಿಯಾಗಿರುವ ಕಾರಣ ಅಧಿಕಾರಿಗಳು ಈ ಬಗ್ಗೆ ಆತಂಕಪಡಬೇಕಾಗಿಲ್ಲ.